ಬ್ರಹ್ಮಗಿರಿ ಭಾರತದ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಪರ್ವತ ಶ್ರೇಣಿಯಾಗಿದೆ. ಇದು ಆ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿದೆ . ತ್ರಯಂಬಕೇಶ್ವರ ಶಿವ ದೇವಾಲಯವು ಈ ಸ್ಥಳದ ಸಮೀಪದಲ್ಲಿದೆ. ಪವಿತ್ರ ಗೋದಾವರಿ ನದಿಯ ಮೂಲವು ತ್ರಯಂಬಕದ ಬಳಿ ಇದೆ. == ಸ್ಥಳ == ಬ್ರಹ್ಮಗಿರಿ ಎಂದರೆ ಬ್ರಹ್ಮನ ಬೆಟ್ಟ (ಗಿರಿ). ಇದು ಅನೇಕ ಪೌರಾಣಿಕ ದಾಖಲೆಗಳಲ್ಲಿ ಕಂಡುಬರುತ್ತದೆ. ಈ ಬೆಟ್ಟದ ಮೇಲೆ ಋಷಿ ಗೌತಮ ಮತ್ತು ಆತನ ಪತ್ನಿ ಅಹಲ್ಯಾ ನೆಲೆಸಿದ್ದರು ಎಂದು ಪುರಾಣ ಹೇಳುತ್ತದೆ. ಋಷಿ ಗೌತಮರು ಈ ಬೆಟ್ಟದಲ್ಲಿ ಗಂಗೆಯನ್ನು ತರಲು ಶಿವನನ್ನು ಪೂಜಿಸಿದರು. ಬ್ರಹ್ಮಗಿರಿ ಬೆಟ್ಟಗಳಲ್ಲಿ ಈ ನದಿಯನ್ನು ಗೌತಮಿ ನದಿ ಎಂದು ಕರೆಯಲಾಗುತ್ತದೆ. ಬ್ರಹ್ಮಗಿರಿಯ ಉಬ್ಬುತಗ್ಗಾದ ಭೂಪ್ರದೇಶಗಳು ಪ್ರಕೃತಿ ನಡಿಗೆ ಮತ್ತು ಚಾರಣದಂತಹ ಸಾಹಸಮಯ ಪ್ರಯಾಣಗಳಿಗೆ ಸವಾಲಿನ ತಾಣಗಳಾಗಿವೆ. ದಟ್ಟ ಮರಗಳ ನಡುವೆ ಅನೇಕ ಚಾರಣದ ಹಾದಿಗಳಿವೆ. ಈ ಶ್ರೇಣಿಗಳು ನೈಸರ್ಗಿಕ ಆಕರ್ಷಣೆಗಳು ಮತ್ತು ರಮಣೀಯ ತಾಣಗಳಿಂದ ಸಮೃದ್ಧವಾಗಿವೆ. ಬ್ರಹ್ಮಗಿರಿ ಬೆಟ್ಟವನ್ನು ಶಿವನ ಬೃಹತ್ ರೂಪವೆಂದು ಪರಿಗಣಿಸಲಾಗಿದೆ ಮತ್ತು ಒಂದು ಕಾಲದಲ್ಲಿ ಇದರ ಪರ್ವತಾರೋಹಣವನ್ನು ಪಾಪವೆಂದು ಪರಿಗಣಿಸಲಾಗಿತ್ತು. 1908 ರಲ್ಲಿ ಕರಾಚಿಯ ಸೇಠ್ ಲಾಲಚಂದ್ ಜಶೋದಾನಂದ ಭಂಭಾನಿ ಮತ್ತು ಸೇಠ್ ಗಣೇಶದಾಸ್ ಅವರು 500 ಮೆಟ್ಟಿಲುಗಳನ್ನು ಕಲ್ಲಿನಿಂದ ನಿರ್ಮಿಸಿದರು. ಇದರಿಂದ ಬ್ರಹ್ಮಗಿರಿಗೆ ಸುಲಭವಾಗಿ ತೆರಳಲು ಅನುಕೂಲವಾಗಿದೆ. ಬೆಟ್ಟದ ಮೇಲೆ ಮೂರು ದಿಕ್ಕುಗಳಲ್ಲಿ ನೀರು ಹರಿಯುತ್ತದೆ. ಪೂರ್ವಕ್ಕೆ ಹರಿಯುವ ನದಿಯು ಗೋದಾವರಿ ನದಿಯಾಗುತ್ತದೆ. ದಕ್ಷಿಣಕ್ಕೆ ಹರಿಯುವ ನದಿ ವೈತರ್ಣಾ ನದಿ ಮತ್ತು ಪಶ್ಚಿಮಕ್ಕೆ ಹರಿಯುವ ನದಿಯನ್ನು ಪಶ್ಚಿಮಕ್ಕೆ ಹರಿಯುವ ಗಂಗಾ ಎಂದು ಕರೆಯಲಾಗುತ್ತದೆ ಮತ್ತು ಇದು ಚಕ್ರ ತೀರ್ಥದ ಬಳಿ ಗೋದಾವರಿಯನ್ನು ಸಂಧಿಸುತ್ತದೆ. ಅಹಲ್ಯಾ ನದಿಯು ಗೋದಾವರಿಯನ್ನು ತ್ರಯಂಬಕೇಶ್ವರ ದೇವಸ್ಥಾನದ ಮುಂದೆ ಸಂಧಿಸುತ್ತದೆ. ಮಕ್ಕಳಿಲ್ಲದ ಕುಟುಂಬಗಳು ಅಹಲ್ಯಾ ಸಂಗಮದಲ್ಲಿ ಪೂಜಿಸಿ ಮಗುವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. == ಚಿತ್ರಸಂಪುಟ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ://../ " - . - ". .. 2012-12-27. 2014-08-26.